Events

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಮಾರ್ಚ್ ೩೦ ರಂದು ‘ಎಕ್ಸ್‌ಪ್ಲೋರಿಕಾ’ ಅಂತರ್ಕಕ್ಷ್ಯಾ ಮ್ಯಾನೇಜ್‌ಮೆಂಟ್

ಫೆಸ್ಟ್ ಜರಗಿತು.

ಕಾಲೇಜಿನ ಪ್ರಾಚಾರ್ಯರಾದ ಡಾ.ಮಧುಸೂದನ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ವಾಣಿಜ್ಯ ಹಾಗೂ ಮ್ಯಾನೇಜಮೆಂಟ್ ವಿದ್ಯಾರ್ಥಿಗಳಿಗೆ ನಾವು ಕಲಿತ ವಾಣಿಜ್ಯ ಹಾಗೂ ನಿರ್ವಹಣಾ ಶಾಸ್ತ್ರಗಳ ಕೌಶಲದ ಪ್ರಾಯೋಗಿಕ ಪ್ರದರ್ಶನಕ್ಕೆ ಇದೊಂದು ಉತ್ತಮ ಅವಕಾಶ ಎಂದು ತಿಳಿಸಿದರು.

ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿ ಪ್ರಮುಖರಾದ ಪವನ್ ಮತ್ತು ಸೃಜನ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಜಾನೆ ರೆನಿಟಾ ಕಾರ್ಯಕ್ರಮ ನಿರ್ವಹಿಸಿದರು.

ಯು.ಪಿ.ಎಂ.ಸಿ. – ಬೀದಿನಾಟಕ ತಂಡಕ್ಕೆ ಪ್ರಶಂಸೆ

ಉಡುಪಿಯ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳನ್ನೊಳಗೊಂಡ ಬೀದಿನಾಟಕ ತಂಡವು ರಂಗಭೂಮಿ (ರಿ) ಉಡುಪಿ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಜಾನಪದ ಕಲಾ ಪ್ರಕಾರ ಬೀದಿನಾಟಕದ ಮೂಲಕ ಆರೋಗ್ಯ ಶಿಕ್ಷಣ ಮಾಹಿತಿ ಕಾರ್ಯಕ್ರಮದ ಅಂಗವಾಗಿ ’ಕಿವಿಮಾತು’, ’ತಾಯಿ ಮತ್ತು ಮಗುವಿನ ಆರೋಗ್ಯ’ ಎಂಬ ವಿಷಯಗಳ ಕುರಿತು ಉಡುಪಿ ಜಿಲ್ಲೆಯಾದ್ಯಂತ ಸುಮಾರು ೨೪ ನಾಟಕ ಪ್ರದರ್ಶನಗಳನ್ನು ನೀಡಿತು.

ಉಡುಪಿ, ಕಾರ್ಕಳ, ಕುಂದಾಪುರದ ವಿವಿಧೆಡೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಥಮ ಬಿ.ಕಾಂ ನ ಗಗನ್ ದೀಪ್, ರಕ್ಷಿತ್, ದೀಕ್ಷಿತ್, ಹಾಶೀತ್, ಶಶಾಂಕ್, ವಿನಯ್ ಶಾನುಭಾಗ್, ನಿಶಾಂತ್, ಪ್ರಥಮ ಬಿ.ಬಿ.ಎ ನ ಅಭಿಜ್ಞಾನ್ ಇವರು ಈ ಪ್ರದರ್ಶನಗಳನ್ನು ನೀಡಿದರು. ರಂಗಭೂಮಿಯ ಸಂಚಾಲಕರಾದ ಶ್ರೀ ರವಿರಾಜ್ ಹೆಚ್.ಪಿ ಮತ್ತು ಸಮಗ್ರ ನಿರ್ವಾಹಕರಾದ ಶ್ರೀಪಾದ್ ಹೆಗಡೆ ರಂಗಭೂಮಿ ಇವರು ನಾಟಕಗಳನ್ನು ನಿರ್ದೇಶಿಸಿದ್ದರು.

ದಿನಾಂಕ ೨೭ ನೇ ಮಾರ್ಚ್ ನಂದು ನಡೆದ ವಿಶ್ವರಂಗಭೂಮಿ ದಿನದಂದು ರಂಗಭೂಮಿ ಯ ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ಇವರು ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿದರು, ಕಾಲೇಜಿನ ಪ್ರಾಚಾರ್ಯರಾದ ಡಾ.ಮಧುಸೂದನ್ ಭಟ್ ರವರಿಗೆ ವಿದ್ಯಾರ್ಥಿಗಳು ಪ್ರಶಂಸಾ ಪತ್ರವನ್ನು ಹಸ್ತಾಂತರಿಸಿದರು, ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ.ಜಿ ಉಪಸ್ಥಿತರಿದ್ದರು.